Founder - Shivamurthy keelara
Founder - Shivamurthy keelara
ಶಿವಮೂರ್ತಿ ಕೀಲಾರ ಅವರ ತವರೂರು ಮಂಡ್ಯದ ಕ್ಷೀರಸಾಗರ. ಶ್ರೀಯುತರು ಪ್ರಾಥಮಿಕ ವಿದ್ಯಾಭ್ಯಾಸ ಸ್ವಗ್ರಾಮ ಕೀಲಾರದಲ್ಲಿ, ಹಾಗೂ ಪ್ರೌಢಶಿಕ್ಷಣ ಅಭಿನವ ಭಾರತಿ ವಿದ್ಯಾ ಕೇಂದ್ರ ,ಮಂಡ್ಯ . ಪದವಿಪೂರ್ವ & ಪದವಿ ಶಿಕ್ಷಣ, ಲಾ ಪದವಿ ಶಿಕ್ಷಣವು ಪಿ,ಇ,ಎಸ್ ವಿಜ್ಞಾನ ಮತ್ತು ಕಲಾ ಕಾಲೇಜು ಮಂಡ್ಯ ಇಲ್ಲಿ ನೆರವೇರಿಸಿದರು.
ಪದವಿ ಹಂತದ ವಿದ್ಯಾರ್ಥಿಯಾಗಿದ್ದಾಗಲೇ ಎನ್ ಎಸ್ ಎಸ್ ,ಕ್ಯಾಂಪ್ ನ ನಾಯಕತ್ವ ವಹಿಸಿ ಗ್ರಾಮೀಣ ಜನತೆಯಲ್ಲಿ ಶಿಕ್ಷಣ ಮಹತ್ವದ ಅರಿವು, ರಕ್ತದಾನ ಶಿಬಿರಗಳು ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಹಣ್ಣು ಸರಬರಾಜು ಹಾಗೂ ಹಳ್ಳಿಗಳಲ್ಲಿ ರೈತರ ಜೊತೆ ಸೇರಿ ರಸ್ತೆ ರಿಪೇರಿ,,, ಹೀಗೆ ಹಲವು ಹತ್ತು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 1991ರ ವೇಳೆಗೆ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ರಾಮಕೃಷ್ಣ ಆಶ್ರಮದ ಗ್ವಾಲಿಯರ್ ಟ್ರೈನಿಂಗ್ ನಾಯಕತ್ವ ವಹಿಸಿದ್ದರು. 1987 ರಲ್ಲಿ ಸ್ವಯಂಸೇವಕರಾಗಿ ವೆಂಕಟೇಶ್ವರ ಧ್ಯಾನ ಕೇಂದ್ರಕ್ಕೆ ಸೇರ್ಪಡೆಯಾದರು.
1995 ರಲ್ಲಿ ರಲ್ಲಿ ತಮ್ಮ ಶಿಕ್ಷಣ ಮುಗಿಸಿ ಬೆಂಗಳೂರಿನ ಹೈಕೋರ್ಟನಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದರು. 1999 ರ ಹೊತ್ತಿಗೆ ಯುಎಸ್ಎಗೆ ತೆರಳಿ ಅಲ್ಲಿನ ಸಾಫ್ಟ್ ವೇರ್ ಕಂಪನಿಯಲ್ಲಿ ಲೀಗಲ್ ಕನ್ಸೊಲೆಂಟ್ ಆಗಿ ಕೆಲಸ ನಿರ್ವಹಿಸಿದರು. 2003ರಲ್ಲಿ ಶ್ರೀಯುತರು ಸಿಇಓ ಆಗಿ ಚಿಕಾಗೋದಲ್ಲಿ ತಮ್ಮ ಕಾರ್ಯದಲ್ಲಿ ತೊಡಗಿದ್ದು 2010ರಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಎ,ಸಿ,ಎಸ್ ಡೆವಲಪರ್ಸ್ ನ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಇಲ್ಲಿಯೂ ಸಹ ತಮ್ಮನ್ನು ತೊಡಗಿಸಿಕೊಂಡರು. 2011ರ ವೇಳೆಗೆ ಅಮೆರಿಕಾದ ಅಕ್ಕ ಸಂಸ್ಥೆಗೆ ಚುನಾಯಿತರಾಗಿ *ಉಪಾಧ್ಯಕ್ಷ *ಸ್ಥಾನ ಅಲಂಕರಿಸಿದರು. ಅಮೇರಿಕಾದ ಕನ್ನಡಿಗರ ಸಾಧನೆಯು ಕರ್ನಾಟಕದ ಟಿವಿ ಚಾನೆಲುಗಳ 26 ಎಪಿಸೋಡುಗಳಲ್ಲಿ *ಸಾಗರದಾಚೆ ಸಪ್ತಸ್ವರಗಳು * ಕಾರ್ಯಕ್ರಮ ಬಿತ್ತರ ಗೊಂಡಿದ್ದು 2009-- 2010ರಲ್ಲಿ.
2016ರಲ್ಲಿ ಶ್ರೀಯುತರುಬೆಳಗಾಂ ಗ್ರಾಮೀಣ ಜನತೆಗೆ ಅನುಕೂಲಕರವಾಗುವಂತೆ 'ಸೋಲಾರ್ ಪವರ್ ಪ್ರಾಜೆಕ್ಟ್ 'ಶುರು ಮಾಡಿ 'ಎಸೆಟ್ಎಲೆನ ಎನರ್ಜಿ ರಿ , ಪ್ರೈವೇಟ್ ಲಿಮಿಟೆಡ್ ನಾ ಸ್ಥಾಪಕರಾದರು. 2017ರಲ್ಲಿ ಮಂಡ್ಯದಗ್ರಾಮೀಣ ವಿದ್ಯಾರ್ಥಿಗಳು ಹಾಗೂ ಅಭಿನವಭಾರತಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಮೆರಿಕಾದ *ನಾಸಾ *ಗೆ ಕರೆದೊಯ್ಯುವ ಜವಾಬ್ದಾರಿ ನಿರ್ವಹಿಸಿದರು. ನಂತರದಲ್ಲಿ "ರೈತರು ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಹಾರಗಳು" ವಿಷಯ ಕುರಿತ ರಾಜ್ಯಮಟ್ಟದಲ್ಲಿ ಉಪನ್ಯಾಸ ಆಯೋಜನೆ ಸಂಘಟನೆ ಗೊಳಿಸಿದರು. ಅಂತರಾಷ್ಟ್ರೀಯ ಯೋಗ ದಿನದಲ್ಲಿ ಸುಮಾರು 5000 ಯೋಗಪಟುಗಳ ಸಮ್ಮೇಳನ , 2018 ರಲ್ಲಿ ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಸಹಾಯ ಹಸ್ತ, ಶಾಲಾ ಕಟ್ಟಡಗಳ ಪುನರ್ರಚನೆಗೆ ಧನಸಹಾಯ, ಕ್ಯಾನ್ಸರ್ ಪೀಡಿತ ರೋಗಿಗಳು ಹಾಗೂ ದೀನದಲಿತ ಸಮುದಾಯಕ್ಕೆ ಅನುಕೂಲವಾಗುವಂತೆ ಆಸ್ಪತ್ರೆಗೆ *"ಮಮ್ಮೋಗ್ರಂ ಬಸ್ *"ನಿಯೋಜನೆ ಹೀಗೆ ಹತ್ತು ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಶ್ರೀಯುತರು 2018 ರಲ್ಲಿ ಅಮೇರಿಕಾದಿಂದ ಅಕ್ಕ *ಸಂಸ್ಥೆಯ ಚುನಾಯಿತ *ಅಧ್ಯಕ್ಷ *ಸ್ಥಾನ ಅಲಂಕರಿಸಿದ್ದು ನಿಜಕ್ಕೂ ಶ್ಲಾಘನೀಯ ಮತ್ತು ಪ್ರಶಂಸನೀಯವಾದುದು. 2019ರಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಖಗೋಳವಿಜ್ಞಾನ ದರ್ಶಿಸುವ ಸಲುವಾಗಿ ಆಕಾಶಕಾಯ, ನಕ್ಷತ್ರಪುಂಜ, ಚಂದ್ರ ಗ್ರಹಗಳ ದರ್ಶನಕ್ಕಾಗಿ ಟೆಲಿಸ್ಕೋಪ್ ಕೊಡುಗೆ, 2019ರಲ್ಲಿ ಆಧ್ಯಾತ್ಮಿಕಚಲನಚಿತ್ರಗಳು, ವಿದ್ಯಾಭೂಷಣ ಸ್ವಾಮೀಜಿ ಅವರ ಹಾಡುಗಾರಿಕೆ ಕಾರ್ಯಕ್ರಮಗಳ ಆಯೋಜನೆ, ಡಾಕ್ಟರ್ ಶಿವಕುಮಾರ ಸ್ವಾಮೀಜಿ ಅವರ ಚಿಕಿತ್ಸೆಗೆ ಏರ್ಲಿಫ್ಟ್ ವ್ಯವಸ್ಥೆಯಲ್ಲಿ ಭಾಗವಹಿಸುವಿಕೆ, ಮಂಡ್ಯ ಜಿಲ್ಲೆಯ ಮಳವಳ್ಳಿ 'ಯುವ ವಿಜ್ಞಾನಿ ಪ್ರತಾಪ್ ದ್ರೋಣ್'ನ ಹೆಚ್ಚಿನ ಶಿಕ್ಷಣಕ್ಕೆ 1,00000 ಪ್ರೋತ್ಸಾಹಧನ ದೇಣಿಗೆ ನೀಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ನುರಿತ ವೈದ್ಯರಿಂದ 2019ರಲ್ಲಿ ಮಂಡ್ಯದ ವಿವಿಧ ಕಡೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಕಾರ್ಯಾಗಾರಗಳನ್ನು ಆಯೋಜಿಸಿ ಗ್ರಾಮೀಣ ಜನತೆಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.
ಹೀಗೆ ಹತ್ತು ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿದ್ದ ಶ್ರೀಯುತರು , 2019ರಲ್ಲಿ ಅಭಿನವ ಭಾರತೀಯ ಅಂಗಸಂಸ್ಥೆಯಾದ ಮದ್ದೂರಿನ ಮೂಡಲ ದೊಡ್ಡಿಯನ್ನು ಸಂಘಟಿತ ಚಟುವಟಿಕೆಗಳ ನೆಲೆಯಾಗಿಸಿ ಶಿಕ್ಷಣದ ಮಹತ್ವದ ಜೊತೆಗೆ ವಿದ್ಯೆಯೇ ಅಧಿಪತಿಯಾದ ಗಣೇಶನ ದೇವಸ್ಥಾನ, ದಕ್ಷಿಣಾಮೂರ್ತಿ ವಿಗ್ರಹ ಜೊತೆಗೆ ಗ್ರಾಮೀಣ ಜನತೆಯ ಉದ್ಧಾರಕ್ಕಾಗಿ ಅದರಲ್ಲೂ* ಮಹಿಳೆ ಅಬಲೆಯಲ್ಲ ಸಬಲೆ ಎಂಬ ನೈತಿಕ ನೆಲೆಗಟ್ಟಿಗೆ ಆಧಾರಿತವಾಗಿ ಅವರಿಗೆ ಅನುಕೂಲಕರವಾಗುವಂತೆ ಉದ್ಯೋಗಗಳ ಸೃಷ್ಟಿಯ ನಿರ್ಮಾತೃ ಎನಿಸಿದ್ದಾರೆ. ಸ್ವದೇಶಿ ಉತ್ಪಾದನೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ ಶ್ರೀಯುತರು ಆಸಕ್ತಿಯುತ ಉತ್ತಮ ಉತ್ಪಾದನೆಗಳ ವ್ಯವಸ್ಥೆಯನ್ನು ಸುಸಜ್ಜಿತ ಗೊಳಿಸಿದ್ದು "ಗಾಣದಿಂದ ಎಣ್ಣೆ ತಯಾರಿಕ ಘಟಕ ,ಆಹಾರ ಬಳಕೆ ವಸ್ತುಗಳ ಪೊಟ್ಟಣ ಕಟ್ಟುವಿಕೆ, ಗಂಧದಕಡ್ಡಿ ತಯಾರಿಕಾ ಘಟಕ ,ಅಡಿಕೆ ಎಲೆಗಳ ತಟ್ಟೆ ತಯಾರಿಕೆ ಘಟಕ,ಹಸು ಸಾಕಾಣಿಕೆ ಹಾಲು ಉತ್ಪಾದನಾ ಘಟಕ "ಹೀಗೆ ಗ್ರಾಮೀಣಾಭಿವೃದ್ಧಿಗೆ ಪ್ರೇರಕವಾಗುವ ಅಂತಹ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದು ಸಾವಿರಾರು ಕುಟುಂಬದ ಉದ್ಯೋಗದಾತ ಎನಿಸಿದ್ದಾರೆ.
ಶಿಕ್ಷಣ ವ್ಯವಸ್ಥೆಯಲ್ಲಿ ಮಾತ್ರವಲ್ಲದೆ, ಆಧ್ಯಾತ್ಮಿಕತೆಯಲ್ಲಿ ಅಪಾರ ಆಸಕ್ತಿ ಇರುವ ಶ್ರೀಯುತರು ಅಭಿನವ ಭಾರತಿ ಕೇಂದ್ರದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿಯುತರಾಗಿದ್ದು ಯೋಗ, ಧ್ಯಾನ, ಭಜನೆ, ಸತ್ಸಂಗ ಗಳಿಂದ ಮನುಷ್ಯನ ಧ್ಯೇಯ ಸಾಧ್ಯ ಎಂದು ನಂಬಿದವರು. ಧ್ಯಾನಕೇಂದ್ರ ಮತ್ತು ವೈಕುಂಠ ವಾರ್ತಾ ಪತ್ರಿಕೆಯಲ್ಲಿನ ಆಧ್ಯಾತ್ಮ ಚಿಂತನೆಯ ಬಗ್ಗೆ ಅತಿ ಹೆಚ್ಚು ಒಲವಿರಿಸಿ ಕೊಂಡಿರುವ ಶ್ರೀಯುತರು ಅದರ ಅಭಿವೃದ್ಧಿಗಾಗಿ ಕೈಜೋಡಿಸಿರುವ ಚೈತನ್ಯ ಪುರುಷರಾಗಿ ದ್ದಾರೆ.
ಶಿವಮೂರ್ತಿ ಕೀಲಾರ ಅವರು ತಮ್ಮ ಸಮಾಜಮುಖಿ ಕೆಲಸದಲ್ಲಿ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ. ಬಯಸದೇ ಬಂದ ಭಾಗ್ಯ ಎಂಬಂತೆ ಇವರ ಸಮಾಜಮುಖಿ ಕೆಲಸಗಳನ್ನು ಗಮನಿಸಿ ಮೈಸೂರು"" ವಿವಿ ಅಲ್ಯುಮಿನಿ ಅಸೋಶಿಯೇಶನ್ ನಡೆಸುತ್ತಿರುವ ಮೂರನೆಯ ವೈಶ್ವಿಕ ಸಮ್ಮೇಳನದಲ್ಲಿ ಅಭಿನವಭಾರತೀ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾಗಿ ರುವ ಶ್ರೀ ಶಿವಮೂರ್ತಿ ಕೀಲಾರ ಅವರು ಅನಿವಾಸಿ ಭಾರತೀಯ ಸಮಾಜ ಸೇವಕನಾಗಿ ಸಲ್ಲಿಸುತ್ತಿರುವ ಉನ್ನತ ಕೊಡುಗೆಗಾಗಿ ವಿಶ್ವಮಟ್ಟದ ಪುರಸ್ಕಾರ ಭಾಜನ ರಾಗಿರುವ ಸಂತಸದ ಸುದ್ದಿ.